ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು?

ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನುವುದರಿಂದ ಉತ್ಪನ್ನವಾಗುವ ನಾದಶಕ್ತಿಯಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕಾರ್ಯನಿರತವಾಗುತ್ತವೆ, ಹಾಗೆಯೇ ಸೀನುವುದರಿಂದ ಪ್ರಕ್ಷೇಪಿತವಾಗುವ ವಾಯುತತ್ತ್ವದ ಲಹರಿಗಳಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕೆಳಗಿನ ದಿಕ್ಕಿನಲ್ಲಿ (ಭೂಮಿಯ ಕಡೆಗೆ) ಪ್ರಕ್ಷೇಪಿತವಾಗದೆ ಮೇಲಿನ ದಿಕ್ಕಿನಲ್ಲಿ (ಆಕಾಶದೆಡೆಗೆ) ಪ್ರಕ್ಷೇಪಿತವಾಗುತ್ತವೆ. ಇದರಿಂದ ವಾಸ್ತುವಿನಲ್ಲಿ ತೊಂದರೆದಾಯಕ ಲಹರಿಗಳ ಸಂಚಾರವು ಹೆಚ್ಚಾಗುತ್ತದೆ; ಆದುದರಿಂದ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಬಾರದು.

ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಹೊಸ್ತಿಲಿನ ಮೇಲೆ ನೀರನ್ನು ಹಾಕಬೇಕೆಂದು ಹೇಳುತ್ತಾರೆ, ಇದರ ಕಾರಣವೇನು?

ಹೊಸ್ತಿಲಿನ ಮೇಲೆ ನೀರನ್ನು ಹಾಕುವುದೆಂದರೆ ಒಂದು ರೀತಿಯಲ್ಲಿ ಮೇಲಿನ ದಿಕ್ಕಿನಲ್ಲಿ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳನ್ನು ಶಾಂತ ಮಾಡುವುದಾಗಿದೆ. ನೀರಿನಲ್ಲಿನ ಪೃಥ್ವಿ ಮತ್ತು ಆಪತತ್ತ್ವಗಳ ಲಹರಿಗಳಿಂದ, ವಾಯುತತ್ತ್ವದ ಆಧಾರದಿಂದ ಮೇಲಿನ ದಿಕ್ಕಿನಲ್ಲಿ ಚಲಿಸುತ್ತಿರುವ ಲಹರಿಗಳಿಗೆ ಜಡತ್ವವು ಪ್ರಾಪ್ತವಾಗುತ್ತದೆ. ಇದರಿಂದ ಆ ಲಹರಿಗಳು ಮತ್ತೆ ಭೂಮಿಯ ಕಡೆಗೆ ಚಲಿಸತೊಡಗುತ್ತವೆ. ಆದುದರಿಂದ ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಕೂಡಲೇ ಅದರ ಮೇಲೆ ನೀರು ಹಾಕಿ ರಜ-ತಮಾತ್ಮಕ ಲಹರಿಗಳ ಶಮನ ಮಾಡಬೇಕು.

ಸಂಬಂಧಿತ ಲೇಖನಗಳು
ವಾಸ್ತು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!

2 comments:

  1. dayavittu vaignanik udaharane kottare yuv janate nambabahudu, adakkagi vaignanikavad udaharanegalu ellarigu tiliyuvante serisidare upayuktavagiruttade embuvudu nanna anisike, Dhanyavadagalu

    ReplyDelete
    Replies
    1. ಸಲಹೆ ಚೆನ್ನಾಗಿದೆ. ಆದರೆ ಬಹುತೇಕ ವಿಷಯಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಲು ವಿಜ್ಞಾನಕ್ಕೆ ಮಿತಿಯಿರುವುದರಿಂದ ಅದನ್ನೆಲ್ಲ ಆಧ್ಯಾತ್ಮಿಕ ಸಾಧನೆಯಿಂದಲೇ ತಿಳಿಯಬೇಕಾಗುತ್ತದೆ. ವಿಜ್ಞಾನವು ಏನಿದ್ದರೂ ಕಣ್ಣಿಗೆ ಕಾಣುವಂತಹ ವಿಷಯಗಳನ್ನು ದೃಢೀಕರಿಸುತ್ತದೆ! ಹೆಚ್ಚೆಂದರೆ ಡಿ.ಎನ್.ಎ., ನ್ಯೂಟ್ರಾನ್, ಪ್ರೋಟಾನ್ ಇತ್ಯಾದಿ. ಉದಾಹರಣೆಗೆ ಪ್ರೀತಿ ಎಂಬುದನ್ನು ನಾವು ಅನುಭವಿಸುವಂತಹದ್ದು, ಅದನ್ನು ವಿಜ್ಞಾನಕ್ಕೆ ಯಾವ ಮನುಷ್ಯನಲ್ಲಿ ಪ್ರೀತಿ ಹುಟ್ಟಿದೆ ಎಂದು ತೋರಿಸಲು ಕಷ್ಟವಾಗುತ್ತದೆ. ಹಾಗೆಯೇ ಈ ಅಧ್ಯಾತ್ಮವೂ ಅನುಭವಿಸುವಂತಹ ವಿಷಯವಾಗಿದೆ.
      ಕೆಲವು ವಿಷಯಗಳನ್ನು ವಿಜ್ಞಾನವು ಹೇಳುತ್ತದೆ. ಉದಾಹರಣೆಗೆ ಇದೇ ಬ್ಲಾಗ್‌ನಲ್ಲಿ ನೀಡಿರುವ 'ಗ್ರಹಣಕಾಲದಲ್ಲಿ ಆಹಾರ ಏಕೆ ಸೇವಿಸಬಾರದು?' ಎಂಬುದರ ಬಗ್ಗೆ ವಿಜ್ಞಾನದ ವಿವರಣೆಯೇನೆಂದರೆ ಸೂರ್ಯನಿಗೆ ಗ್ರಹಣವಾದಾಗ ವಾತಾವರಣದಲ್ಲಿ ನಿಧಾನವಾಗಿ ಕತ್ತಲು ಕವಿದಂತಾಗುವುದರಿಂದ ರಾತ್ರಿಯಲ್ಲಿ ಕೆಲಸ ಮಾಡುವ ಬ್ಯಾಕ್ಟೀರಿಯಾಗಳು ಕಾರ್ಯಾನ್ವಿತವಾಗುತ್ತವೆ, ಆದುದರಿಂದ ಆಹಾರವು ಇದ್ದಕ್ಕಿದ್ದಂತೆ ಕಲುಷಿತವಾಗುವುದರಿಂದ ಅದನ್ನು ತಿನ್ನಬೇಡಿ ಎನ್ನುತ್ತದೆ. ವಿಜ್ಞಾನಕ್ಕೆ ಇಷ್ಟೇ ಮಿತಿಯಿದೆ. ಆದರೆ ಅಧ್ಯಾತ್ಮವು ಇಷ್ಟೇ ಅಲ್ಲದೇ ಅದರ ಇನ್ನೂ ಸೂಕ್ಷ್ಮಕಾರಣ ತಿಳಿಸುವುದರ ಜೊತೆಗೆ, ಪುನಃ ಆಹಾರ ಸೇವಿಸಬೇಕಾದರೆ ಯಾವ ರೀತಿ ಶುದ್ಧತೆಯನ್ನು ಮಾಡಿ ಸೇವಿಸಬೇಕು ಮುಂತಾದ ಅನೇಕ ಪರಿಹಾರಗಳನ್ನೂ ತಿಳಿಸುತ್ತದೆ. ಇನ್ನೇನಾದರೂ ಸಂದೇಹವಿದ್ದರೆ ತಿಳಿಸಿ.

      Delete

Note: only a member of this blog may post a comment.